ಮಾನಸರಂಗ

ಇದು ಮನಸಿನ ಮಾತಿಗೊಂದು ಜಾಗ...

ಅಮ್ಮನಿಗಾಗಿ...

"ತಾಯೇ ನಿನ್ನ ಮಡಿಲಲಿ..ಕಣ್ಣು ತೆರೆದ ಕ್ಷಣದಲಿ" 
ಎಷ್ಟು ಸುಂದರ ಈ ಸಾಲುಗಳು.. ಅಮ್ಮ ,ತಾಯಿ ಅಕ್ಷರಗಳೆರಡೇ  ಆದರೂ ವಿಶಾಲವಾದ ಅರ್ಥ ಈ ಪದಗಳಲಿ..ಜಗತ್ತಿನ ಪ್ರತಿಯೊಬ್ಬ ಜೀವಿಯ ಹುಟ್ಟಿನ ಹಿಂದಿರುವ, ತ್ಯಾಗ,ಕರುಣೆ ಮಮತೆಗಳ ಸಾಕಾರ ಮೂರ್ತಿ ಈ ಅಮ್ಮ. ಜಗತ್ತಿನ  ಪ್ರತಿಯೊಬ್ಬ  ಜೀವಿಯ  ಹಿಂದಿರುವ  ತ್ಯಾಗಮೂರ್ತಿ  ಈ  ತಾಯಿ . 
ಎಷ್ಟು  ವರ್ಣಿಸಿದರು  ಬಣ್ಣಿಸಿದರು  ನಿಲುಕದೆತ್ತರಕ್ಕೆ  ಏರಿ  ಬಿಡುತ್ತಾಳೆ  ಈ  ಮಾತೆ..
ಕೇವಲ  ಮಾಂಸದ  ಮುದ್ದೆಯಾದ  ಬ್ರೂಣಕ್ಕೆ  ಒಂದು  ಆಕಾರ ಬರುವವರೆಗೂ  ತನ್ನ  ಉದರದಲ್ಲಿ  ಪೋಷಿಸಿ,ತನ್ನ  ಆಹಾರದಲ್ಲೇ  ಪಾಲುನೀಡಿ ಒಂಬತ್ತು  ತಿಂಗಳು  ಹೊತ್ತು  ಕೊನೆಗೆ  ಯಮಯಾತನೆ ಯನ್ನು  ಅನುಭವಿಸಿ  
ಜಗತ್ತಿಗೆ  ನಮ್ಮನ್ನು  ತರುತ್ತಾಳಲ್ಲ ಹೇಗೆ  ತೀರಿಸಲಮ್ಮ  ನಿನ್ನ  ಋಣವ..???ತನ್ನ  ನಿದ್ದೆಯನ್ನು  ಬಿಟ್ಟು  ರಾತ್ರಿ  ಅಳುವ  ಕಂದನನ್ನು 
ಸಮಾಧಾನಿಸಿ  ಲಾಲಿ ಹಾಡುತ್ತಳಲ್ಲಆ  ತಾಯಿಯ  ಬಣ್ಣಿಸಲು  ಸಾದ್ಯವೇ …
ಮಕ್ಕಳ  ಸುಖದಲ್ಲಿ  ತನ್ನ  ನಗುವನ್ನು  ಕಾಣುತ್ತಾಳಲ್ಲ ಜಗತ್ತಿನಲ್ಲಿ  ಯಾವದಕ್ಕೂ  ಸಮನಾಗದ ವ್ಯಕ್ತಿ  ಈ  ಮಾತೆ.…
“ಅಮ್ಮನಿಗಾಗಿ ಕರ್ಣ ಸೋತ,
ಅಪ್ಪನಿಗಾಗಿ ರಾಮ ಸೋತ,
ಹಾಲಿಗೆ ನಾನು ಸೋತೆ..
ಕಂದಾ ಎಂದಾ ನಾಲಿಗೆ ನಾನು ಸೋತೆ...."
ಎಷ್ಟು ಕವಿಗಳು ಗೀಚಿದರು ಹಾಡಿ ಹೊಗಳಿದರು ಈ ಪದದ ಅರ್ಥವನ್ನು ಹೇಳಲು ಸಾಧ್ಯವಿಲ್ಲ.ಒಮ್ಮೆ ಹೆಂಡತಿಯ ಆಸೆಗಾಗಿ ಮಗ ತನ್ನ ತಾಯಿಯನ್ನು ಕೊಂದು ಅವಳ ಹ್ರದಯ ವನ್ನು ಹಿಡಿದು ಓಡ ತೊಡಗಿದನಂತೆ.
ಆಗ ತಾಯಿಯ ಹ್ರದಯ “ಕಂದ ಬಿಡದಿಯ ಜೋಪಾನ "ಎಂದಿತಂತೆ. ಅಂತಹ ನಿಸ್ವಾರ್ಥ ಪ್ರೇಮ ಆ ತಾಯಿ ಮನಸಿನದು. ಅದಕ್ಕೆ ಇರಬೇಕು ಶಂಕರಾಚಾರ್ಯರು ಹೇಳುತ್ತಾರೆ “ಕ್ವಚಿದಪಿ ಕುಮಾತ ನ ಭವತಿ  ಅಂದರೆ ಈ ಪ್ರಪಂಹದಲ್ಲಿ ಯಾರು ಬೇಕಾದರೂ ಕೆಟ್ಟವರಾಗ ಬಹುದಂತೆ..ಆದರೆ ಆ ತಾಯಿ ಮಾತ್ರ ಕೆಟ್ಟ ವಳಾಗಲಾರಳು..
ಮಾತೆ  ತನ್ನಕಂದನಿಗಾಗಿ  ಏನೆಲ್ಲಾ  ಮಾಡಲು  ತಯಾರಾಗುತ್ತಾಳೆ..
ತನ್ನಸುಖವನ್ನೆಲ್ಲ  ಬದಿಗೊತ್ತಿ  ತನ್ನಕಂದನಿಗೆ  ಸುಪ್ಪತ್ತಿಗೆಯ  ಬಾಳನ್ನು  ಕಟ್ಟಿಕೊಡಲು  ಅಣಿಯಾಗುತ್ತಾಳೆ.. ಆಕೆ  ಏನನ್ನು  ಬೇಕಾದರೂ  ಸಹಿಸಿಯಾಳು..ಆದರೆ  ತನ್ನ  ಕಂದನ  ಕಣ್ಣಲ್ಲಿ  ನೀರು  ಬಂದರೆ  ತಾನೂ  ಕಣ್ಣಿರಿಡುತ್ತಾಳೆ.ಆ ಮಾತ್ರಪ್ರೇಮ ಆಕೆಯ ಕೊನೆ ಉಸಿರುರುವರೆಗೂ ಜಾಗ್ರತವಾಗಿರುತ್ತದೆ.

ಆದರೆ ನಮ್ಮಲ್ಲಿ ಇರುವ ಎಷ್ಟುಮೂಢಮಕ್ಕಳು ತಮ್ಮ ಕಾಲ ಮೇಲೆನಿಲ್ಲುತ್ತಿದ್ದಂತೆ ಎಲ್ಲವನ್ನು ಮರೆತು ತಾಯಿ ತಂದೆಯರನ್ನು ಮೂಲೆ ಗುಂಪ ಗಿಸಿ ಕೈ ತೊಳೆದು ಕೊಳ್ಳುತ್ತಿದ್ದಾರೆ . ಮೊನ್ನೆ ಬೀದಿಯಲ್ಲಿ ನಡೆಯುತ್ತಿದ್ದಾಗ ಒಬ್ಬ ಅಜ್ಜಿ ರೋಡ್ ಕ್ರಾಸ್ ಮಾಡಲು ಹೆದರುತ್ತಿದ್ದನ್ನು ಕಂಡು ಅಯ್ಯೋ ಎನಿಸಿ help ಮಾಡೋಣವೆಂದು ಹೋದೆ. ಯಾಕೆ ಯದೋ ಎಳಿವಯಸ್ಸು.ಅಜ್ಜಿನೀವ್ಯಾಕೆಬರಲು ಹೋದಿರಿ ಆರಾಮಾಗಿ ಕುಳಿತು ಕೊಂಡುಇರುವುದನ್ನು ಬಿಟ್ಟು ಎಂದಾಗ ಆ ಅಜ್ಜಿ ನಗುತ್ತ ಉತ್ತರಿಸಿದರು . ತಂಗಿ  tablet ಬೇಕಾಗಿತ್ತು .. ಮನೆಯಲ್ಲಿ ಮಗನಿಗೆ ಒಂಚೂರು ಬಿಡುವಿರಲಿಲ್ಲ  ಭಾನುವಾರವೆಂದು ಸೆನೆಮ ನೋಡಲು ಹೋಗಿದ್ದಾರೆ ಅದಕ್ಕೆ ನಾನೆ ಬಂದೆ ಎಂದು..ಅಂತ ಸ್ಥಿತಿಯಲ್ಲೂ  ಆಕೆ ತನ್ನ ಮಗನನ್ನು ಬಿಟ್ಟುಕೊಡಲು ತಯಾರಿರಲಿಲ್ಲ . ಆ ಮಾತ್ರ ಪ್ರೇಮಕ್ಕೆ ಹೇಳಲು ನನ್ನಲ್ಲಿ ಪದಗಳಿರಲಿಲ್ಲ.ಅಂತ ಮಕ್ಕಳಿಗೆ ದಿಕ್ಕಾರ ವಿರಲಿ..

“ಕಡಿಯಲೋಲ್ಲೆ ನೀ ಕರುಳ ಬಳ್ಳಿ
ಒಲವೂಡುತಿರುವ ತಾಯೇ ಬಿಡದಿ ಭೂವಿಯ ಮಾಯೆ "
ಒಮ್ಮೆ ಯೋಚಿಸಿ ನೋಡಿ . ಒಂದು ವೇಳೆ ಆ ತಾಯಿ ಎನ್ನುವವಳು ತನ್ನ ಸುಖದ ಬಗ್ಗೆ ಯೋಚಿಸಿದ್ದರೆ ನಾವಿಂದು ಈ ಭೂಮಿಯ ಮೇಲೆ ಬರುತ್ತಿರಲಿಲ್ಲ.ಉದರ ದಲ್ಲಿದ್ದಾಗಲೇತೊಂದರೆ ಎಂದು ಹೊಸಕಿ ಹಾಕಿದ್ದರೆ ನಾವಿಂದು ಕಾಣುತ್ತಿರಲಿಲ್ಲ ಈಮಾಯಲೋಕವ ?? ಎಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವೇ ಇರಲಿಲ್ಲ ???? ಹೇಗೆ ಬಣ್ಣಿಸುತ್ತಾ ಹೋದರೆ ಪದಗಳಿಗೆ ಸಿಲುಕಾದಷ್ಟು,ಕಲ್ಪನೆಯನ್ನು ಮೀರುವಷ್ಟು ಆ ತಾಯಿ ಎಂಬ ಪದ ವಿಸ್ತಾರ ವಾಗುತ್ತದೆ  ಅಮ್ಮ ಹೇಗೆ ಬಣ್ಣಿಸಲಮ್ಮ ನಿನ್ನ ...?? ಆ ಮಮತಾ ಮೂರ್ತಿಗೆ ನನ್ನ ಕೋಟಿ ನಮನ....


ಮಾ…. ತುಜ್ಹೆ ಸಲಾಂ.........

ಉಳಿದುಹೋದ ಮಾತುಗಳು.....

“ಮಾಮರವೆಲ್ಲೋ ಕೊಗಿಲೆಯಲ್ಲೋ ಎನೀ  ಸ್ನೇಹ  ಸಂಬಂಧ ಎಲ್ಲಿಯದೋ  ಈ ಅನುಬಂಧ ”
ಎಂದು  ಪ್ರಖ್ಯಾತ  ಕವಿಯೊಬ್ಬರು  ಬರೆದಿರುವ  ಹಾಡು  ರೇಡಿಯೋ  ದಲ್ಲಿ  ಮೂಡಿ  ಬರುತ್ತಿರಲು  ಅಲ್ಲೇ  ಕುಳಿತು  ಓದುತ್ತಿದ್ದ  ನನ್ನ ಮನವು  ಹಿಂದಿನದನ್ನು  ಮೆಲುಕು  ಹಾಕತೊಡಗಿತು.. ಬದುಕು  ಸುಂದರ  ಅನಿಸುವಾಗ  ಸಾಕೋ  ಸಾಕು  ಎನ್ನುವಂತೆ,
ಇನ್ನೇನು  ಏನೂ  ಇಲ್ಲ ಎನುವಾಗ  ಬೇಕಿತ್ತು  ಅನ್ನುವಂತೆ  ಜೀವನದಲ್ಲಿ  ಕೆಲವೊಂದು  ದಿನಗಳು  ಹಾಗೆ  ಇದ್ದು  ಬಿಟ್ಟಿದ್ದರೆ  ಎಷ್ಟು  ಚೆನ್ನಾಗಿತ್ತು 
 ಅಲ್ಲವೇ…..ನೀನು  ನಾನು  ಜೊತೆಯಾಗಿ  ಕಳೆದ  ಎಷ್ಟೊಂದು  ದಿನಗಳ  ಸಾವಿರಾರು  ಕ್ಷಣಗಳ  ನೆನಪು  ಮೂಡಿದಾಗ  ನನಗೆ  ನಾನೇ 
 ಅಂದುಕೊಂಡಿದ್ದಿದೆ.. ಜಗತ್ತು  ಬದಲಾಗ  ಬಾರದಿತ್ತು...!!! ಕೆಲವೊಮ್ಮೆ  ಅಂದುಕೊಳ್ಳುತ್ತೇನೆ  ನಿನಗೆ  ನನ್ನ  ನೆನಪೇ
 ಬರುವುದಿಲ್ಲವೇನೋ?? ಹಾಗೆಂದುಕೊಂಡಾಗ  ನನಗೆ  ನನ್ನ  ಮೇಲೆ  ಬೇಸರವಾಗಿದ್ದಿದೆ…ಮತ್ತೊಮ್ಮೆ  ಅಂದುಕೊಳ್ಳುತ್ತೇನೆ ,
ಈ  ಹಾಳಾದ  ನೆನಪು ನನ್ನಬದಲಾದರೂ  ಬಿಡುತ್ತಿಲ್ಲವಲ್ಲ…ಮರೆಯಬೇಕೆಂದು ಅಂದು  ಕೊಂಡಂತೆ  ಮತ್ತೆ  ಮತ್ತೆ  ಮರುಕಳಿಸುವ  ಸುಂದರ  ನೆನಪುಗಳು.. ಒಮ್ಮೆಲೇ  ಮನದಲ್ಲಿ  ಕಾಮನಬಿಲ್ಲು,ಮತ್ತೆ  ಚಿಂತನ  ಮಂಥನ  ನನ್ನಲ್ಲೇ.…!!!

"ಇಗೇಕೆ ಆ ನೆನಪು ಬಂದೆನ್ನ ಕಾಡಿದೆ
ಎದೆಯ ಆಳದಲ್ಲಿ ವಿಷಾದ ಮೂಡಿದೆ "

ಏನೋ ಸೆಳೆತ ಇದೆ ಕಣೆ ಗೆಳತಿ ನಿನ್ನ ಸ್ನೇಹದಲ್ಲಿ...ನಿನ್ನನೆನಪುಗಳೆಲ್ಲ ಆಯಸ್ಕಾಂತದಂತೆ ನನ್ನ ಸೆಳೆಯುತ್ತವೆ..ಕೇವಲ ನಗುವಿನಲ್ಲಿ ಪರಿಚಯವಾದ ನಾನು ನೀನು ಎಷ್ಟೊಂದು ಆತ್ಮೀಯರಾಗುತ್ತೆವೆಂದು ಬಹುಷ: ನಾವಿಬ್ಬರೂ ಅಂದುಕೊಂಡಿರಲಿಲ್ಲ…
ಆದರೂ ಮರೆಯಲಾಗದ ಒಂದು ಬಂಧ ನಮ್ಮನ್ನು ಬಂದಿಸಿ ಬಿಟ್ಟಿದ್ದು ವಿಪರ್ಯಾಸವೇ.….??ನಿನಗೂ ಹಾಗೆ ಅನಿಸಿದ್ದರೆ ನೀನುನನ್ನಿಂದ ಮಾನಸಿಕವಾಗಿ ಬಹುದೂರ ನಡೆದು ಬಿಡುತ್ತಿರಲಿಲ್ಲ ಅಲ್ಲವೇ.…
                           "ಬಣ್ಣ ಬಣ್ಣದ ಚಿತ್ರ ಬರೆದು
ಹೋದಳೆನ್ನ ತೊರೆದು
ಚಿತ್ರಕ್ಕೆ ಮಸಿ ಬಳಿದು "
ನಿನಗೆ ನೆನಪಿದೆಯೇ...ಎಷ್ಟೊಂದು ಕ್ಷಣಗಳು ನಾವಿಬ್ಬರೂ ಜೊತೆಯಾಗಿ ನಡೆದಿಲ್ಲ.…ಸುಂದರ ಇರುಳಿನಲ್ಲಿಮನಸ್ಸಿನ ಭಾವನೆಗಳನ್ನು ಹಂಚಿಕೊಂಡಿಲ್ಲ...ಎಷ್ಟೊಂದು ವಿಷಯ ಚರ್ಚಿಸಿಲ್ಲ.ನಾನು ಪಟಪಟನೆ ಮಾತನಾಡುತ್ತಿದ್ದರೆ ಸುಮ್ಮನೆ ಹಸನ್ಮುಖಿಯಾಗಿ ಆಲಿಸುತ್ತಿದ್ದ ನಿನ್ನ ಮುಖ, ನಿನ್ನ ಕಣ್ಣುಗಳು ಈಗಲೂ ನೆನಪಿದೆ... ಇವತ್ತಿಗೂ ನಾನೂ ಮಾತನಾಡುತ್ತೇನೆ... ಆದರೆ ಆಲಿಸಲು ನೀನಿಲ್ಲ ಪಕ್ಕದಲ್ಲಿ ಇಷ್ಟೇ ಬದಲಾಗಿದೆ ಜೀವನ..


ನಾನು ಇದ್ದಲ್ಲಿ ನೀನು ನೀನು ಇದ್ದಲ್ಲಿ ನಾನೂ ಎಲ್ಲವೂ ಜೊತೆಯಾಗಿ ಮಾಡುತ್ತಿದ್ದ ನಾವು ಇಂದು ನನಗೆ ನೀನು ನಿನಗೆ ನಾನು..ನೆನಪಾದರೆ ನಿನಗೆ ನಾನು ಸಿಗಲೇ ಬಾರದಿತ್ತು ಇಂದು ಕೂಡ ಅನಿಸಿದ್ದಿದ್ದೆ ನನಗೆ.…ಎಷ್ಟೊಂದು ಕಾಡಿಸಿದ್ದಿದೆ ನಾನು ನಿನಗೆ.…ನೆನೆದಂತೆ ಮನದಲ್ಲಿ ಅರಿವಿಲ್ಲದಂತೆ ಒಂದೊಂದೇ ಪುಟಗಳು ತೆರೆಯುತ್ತ ಹೋಗುತ್ತವೆ.…ನಿನ್ನ ಮಾತು ಮೀರಿದರೆ ನೀನು ಗದರಿಸುತ್ತಿದ್ದ ರೀತಿ “ಅಬ್ಬಾರೆ !!!!”ಎಂದು ಕಣ್ಣು ಬಿಡುತ್ತಿದ್ದ ಮುಖ ಇಂದಿಗೂ ಕೂಡ ನನ್ನ ಮನದಲ್ಲಿ ಅಚ್ಚಾಗಿ ಉಳಿದುಬಿಟ್ಟಿದೆ.…ಯಾರ ಕಣ್ಣುಬಿತ್ತೋ ಏನೋ ಇಂದು ಎಲ್ಲಾ ಸುಳ್ಳೇನು ಅನಿಸುವಷ್ಟರ ಮಟ್ಟಿಗೆ ಬದಲಾಗಿದೆ.…

ಒಂದು ದಿನ ನೋಡದಿದ್ದರೂ ಏನೋ ಕಳೆದು ಕೊಂಡಂತೆ ಭಾಸವಾಗುತ್ತಿದ್ದ ನಮಗೆ ಇಂದು ಫಾರ್ಮಾಲಿಟಿಯ ಮಾತಷ್ಟೇ ಉಳಿದಿದ್ದರೆ
ಜಗತ್ತು ಜೀವನ ಎಂತಹವೈಪರೀತ್ಯಗಳನ್ನು ಸ್ರಷ್ಟಿಸುತ್ತೆ ಅನಿಸುತ್ತದೆ ಅಲ್ಲ..!!ಆದರೂ ಯಾಕೋ ಕಣೆ ನಿನ್ನ
ತುಂಬಾ ಜ್ಞಾಪಿಸಿಕೊಳ್ಳುತ್ತಿನಿ ..ಮರೆತರೂ ನೆನಪಿಸಿಕೊಳ್ಳಲು ಇಷ್ಟಪಡುತ್ತಿನಿ …

““ಇಷ್ಟು ಕಾಲ  ಒಟ್ಟಿಗಿದ್ದು  ಎಷ್ಟು ಬೆರೆತರು
     ಅರಿತೆವೇನು  ನಾವು  ನಮ್ಮ  ಅಂತರಾಳವ”

ಎಷ್ಟು ಕಾಲ ಒಟ್ಟಿಗಿದ್ದ ನಮಗೆ ಇನ್ನಷ್ಟು ಸಮಯ ಒಟ್ಟಿಗೆ ಇರಬಹುದಿತ್ತು..ಇರುತ್ತೆನೆಂದು ನೀನು ನನ್ನ ನಂಬಿಸಿಬಿಟ್ಟಿದ್ದೆ. .. ಆದರೆ ಕ್ರಮೇಣ ನೀನು ಮರೆತೂ ಬಿಟ್ಟೆ...ಅವಕಾಶವಿದ್ದರೂ ಬೇಡವೆಂದು ದೂರ ಸರಿಯುತ್ತಲೇಬಂದೆ...ಎಷ್ಟು ಹತ್ತಿರ ಬಂದರೂ ಬೇಡವೆಂದು ದೂರವಾಗುತ್ತಲೇ ಹೋದೆ..ಇದೆಲ್ಲ ಅರಿವಾದಾಗ ನಾನು ಕಂಪಿಸಿಬಿಟ್ಟಿದ್ದೆ..ಈಗ ಅನಿಸುತ್ತದೆ ನಮ್ಮಲ್ಲಿದ್ದಿದು ಸ್ನೇಹಾನ ಅಥವಾ ಅದೇನೋ NEEDಅನ್ನುತ್ತಾರಲ್ಲ ಅದಾ...???!!!ಇನ್ನು ಉತ್ತರ ಮಾತ್ರ ಸಿಕ್ಕಿಲ್ಲ..!!! ಕೇಳಿದರೆ ನಿನ್ನಿಂದ ಅದೇ ಮೌನ.…ಅದಕ್ಕೆ ನಾನೇ ಉತ್ತರ ಕಂಡು ಕೊಂಡಿದ್ದೇನೆ...ನಾನೆ ಹಿಂತಿರುಗಿ ಹೋಗುವ ಮನಸ್ಸು ಮಾಡಿದ್ದೇನೆ... ನೀನಿಲ್ಲದ ಬದುಕುಅಭ್ಯಾಸವಾಗಿಬಿಟ್ಟಿದೆ.ನಾನಿಲ್ಲದ ಬದುಕೇ ನಿನಗೆ ಸುಂದರವಾಗಿದ್ದರೆ ಅದು ಇನ್ನಷ್ಟು ಸುಂದರವಾಗಿರಲೆಂದು ನಾನು ಬಯಸುತ್ತೇನೆ…ಆ ದೇವರ ಹಾರೈಕೆ ಸದಾ ನಿನ್ನೊಂದಿಗಿರಲಿ.….ಅರಿವಿಲ್ಲದಂತೆ ಕಣ್ಣುಗಳಿಂದ ಹೊಂಗಿಲು ಉದುರಲು… ಅಷ್ಟರಲ್ಲಿ ಅಮ್ಮ ಕರೆದಂತಾಗಿ ನೆನಪಿನಿಂದ ಹೊರ ಬಂದಿದ್ದೆ … ಸಮಯಕ್ಕೆ ಸರಿಯಾಗಿ ನನಗಿಷ್ಟವಾದ

"ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ
ಕೂಡಿ  ಬರದಿರು  ಮತ್ತೆ  ಹಳೆಯ  ನೆನಪೇ  “
ಎಂಬ ಹಾಡನ್ನು ರೇಡಿಯೋದ ಜೊತೆಗೆ ನಾನು ಗುನುಗುನುಗುತ್ತಿದ್ದಂತೆ ನಗುವೊಂದು ನನ್ನಲ್ಲಿ ಮೂಡಿತ್ತು… ನಾನು ಅಮ್ಮನ ಕರೆಗೆ ಓಗೊಟ್ಟು ನನ್ನ ಕೆಲಸದ ಕಡೆಗೆ ಮುಖ ಮಾಡಿದೆ …….

MISSING U....


ಜೊತೆಯಾಗಿ ನಡೆದು ತಿಳಿಯದಂತೆ ನೀ ನಡೆದೇ ಮುಂದೆ...
ಹಿಂಬಾಲಿಸೋಣವೆಂದು ಹಿಂದೆ ಬಂದೆ ಬೇಡವೆಂದು ನೀ ದೂರವಾದೆ...
ನಿನ್ನ  ದಾರಿ ಅರಿಯದೆ ನಾನು ಹಿಂತಿರುಗಿ ಹೋಗುವ ಮನಸ್ಸು ಮಾಡಿದೆ..
ಹೆಜ್ಜೆ ಮಾಸುವ ಮೊದಲೊಮ್ಮೆ ಹೇಳ ಬಯಸುತ್ತೇನೆ..

STILL AM MISSING U.....