ಮಾನಸರಂಗ

ಇದು ಮನಸಿನ ಮಾತಿಗೊಂದು ಜಾಗ...

ಅಡುಗೆ ಮನೆ-ದಾಲ್ ರೈಸ್

ಹವ್ಯಾಸವಾಗಿ ಬರವಣಿಗೆ ಹೇಗೋ, ಹಾಗೆ ಅಡುಗೆಯ ಹುಚ್ಚು ನನ್ನಲ್ಲಿ..ಹೊಸತನ್ನು ಕಲಿಯುವ, ಮಾಡುವ ಅಭ್ಯಾಸ...ನಾನು ಕಲಿಯುವುದು ಮಾಡುವುದು ನಮಗೆ ಸಿಗುವ ಅತ್ಯಂತ ಸರಳ ವಸ್ತುಗಳಿಂದಲೇ..ಆಫೀಸ್ ನಲ್ಲಿ ಫ್ರೀ ಇದ್ದಾಗ ಅಡುಗೆ ತಾಣಗಳನ್ನು ನೋಡಿ,ನನಗೆ ಇಷ್ಟವಾದದ್ದನ್ನು ಬರೆದು ಕೊಂಡು ನಾನು ಮನೆಗೆ ಹೋದಾಗ ಟ್ರೈ ಮಾಡುತ್ತೇನೆ..ಆದರೆ ಇಲ್ಲಿಯವರೆಗೆ ನಾನು ಯಾರಿಂದಲೂ ಯಾಕಾದರೂ ಹೊಸತನ್ನು ಮಾಡುತ್ತಳೊ ಎಂದು ಬೈಸಿಕೊಂಡಿಲ್ಲ.. ತಕ್ಕಮಟ್ಟಿಗೆ ಚೆನ್ನಾಗೆ ಮಾಡುತ್ತೇನೆ..ಹಾಗೆ ಮೊನ್ನೆ  ಮನೆಗೆ ಹೋದಾಗ  ಅಡುಗೆ ಕಾರ್ಯಕ್ರಮವನ್ನು ನೋಡುತ್ತಿದ್ದೆ.ದಾಲ್ ರೈಸ್  ಮಾಡುವುದನ್ನು ತೋರಿಸುತ್ತ ಇದ್ದರು.. ನಾನು ಇದು ಹೋಟೆಲಿನಲ್ಲಿ ತಿನ್ನುವ ಕಿಚಡಿ ಇರಬೇಕೆಂದು ಅಂದು ಕೊಂಡೆ..ಅಮ್ಮ ಕೂಡ ಅದೇ ಇರಬೇಕೆಂದು ಹೇಳಿದರು..ಆಮೇಲೆ ಮಾಡುವ ವಿಧಾನ ನೋಡಿದ ಮೇಲೆ ಬೇರೇನೆ ಅನ್ನಿಸಿತು..ಟ್ರೈ ಮಾಡಿದೆ.. ಚೆನ್ನಾಗಿತ್ತು...ಆಫೀಸ್ ಗೆ,ಮಕ್ಕಳ ಲಂಚ್ ಬಾಕ್ಸ್ ಗೆ  ಚೆನ್ನಾಗಿ ಇರತ್ತೆ..ನೀವು  ಟ್ರೈ ಮಾಡಿ.ಹೇಗಿದೆ ಅಂತ ಹೇಳಿ..

ಬೇಕಾದ ಸಾಮಗ್ರಿಗಳನ್ನು ನಿಮ್ಮ ರುಚಿಗೆ,ಪ್ರಮಾಣಕ್ಕೆ  ತಕ್ಕಂತೆ ಬಳಸಿ..
ಸಾಮಗ್ರಿಗಳು..
ಅಕ್ಕಿ, ತೊಗರಿಬೇಳೆ, ಶುಂಟಿ,ಬೆಳ್ಳುಳ್ಳಿ,ಕೆಂಪು ಮೆಣಸಿನ ಪುಡಿ, ಟೊಮೇಟೊ,ಕೊತ್ತಂಬರಿ ಸೊಪ್ಪು,ಗರಂ ಮಸಾಲ,ಹಸಿಮೆಣಸಿನ ಕಾಯಿ,ಈರುಳ್ಳಿ, ಒಗ್ಗರಣೆಗೆ ಎಣ್ಣೆ,ಅರಿಸಿನ,ಸಾಸಿವೆ,ಬೇವಿನ ಸೊಪ್ಪು ಹಾಗು ರುಚಿಗೆ ತಕ್ಕಷ್ಟು ಉಪ್ಪು,ಸ್ವಲ್ಪ ಸಕ್ಕರೆ, ನಿಂಬೆ ರಸ...
ವಿಧಾನ
ಮೊದಲು  ಒಂದು ಬಾಣಲಿ ಯಲ್ಲಿ ಒಗ್ಗರಣೆಗೆ ಎಣ್ಣೆ ಹಾಕಿ,ಅದು ಕಾದ ನಂತರ ಸಾಸಿವೆ, ಹೆಚ್ಚಿಕೊಂಡ ಈರುಳ್ಳಿ ಹಾಕಿ ಫ್ರೈ ಮಾಡಬೇಕು..ಆಮೇಲೆ ಅರಿಸಿನ ಬೆವಿನಸೋಪ್ಪನ್ನು ಹಾಕಬೇಕು..ನಂತರ ಸಣ್ಣದಾಗಿ ಹೆಚ್ಚಿಕೊಂಡ ಟೊಮೇಟೊ, ಶುಂಟಿ ಬೆಳ್ಳುಳ್ಳಿ ಪೇಸ್ಟ್  ನೊಂದಿಗೆ ಬೇಯಲು ನೀರನ್ನು ಹಾಕಬೇಕು..ನೀರು ಚೆನ್ನಾಗಿ ಕುದಿ ಬಂದಮೇಲೆ  ಖಾರ  ಬೇಕಾದಷ್ಟೇ ಕೆಂಪು ಮೆಣಸಿನ ಪುಡಿ,ಗರಂ ಮಸಾಲ   ಪರಿಮಳಕ್ಕೆ ಉದ್ದವಾಗಿ ಹೆಚ್ಚಿಕೊಂಡ ಹಸಿಮೆಣಸಿನ ಕಾಯನ್ನು,ಕೊತ್ತಂಬರಿ  ಸೊಪ್ಪನ್ನು  ಹಾಕಬೇಕು..
ಕುಕ್ಕರಿನಲ್ಲಿ  ಪ್ರಮಾಣಕ್ಕೆ ತಕ್ಕಂತೆ ಅಕ್ಕಿ, ಅದಕ್ಕೆ ತಕ್ಕಂತೆ ತೊಗರಿಬೇಳೆ  [ ಒಂದು ಕಪ್ ಅಕ್ಕಿಗೆ ಕಾಲು ಕಪ್ ಬೇಳೆಯಂತೆ] ಹಾಗು ಬಾಣಲಿ ಯಲ್ಲಿ ಮಾಡಿಕೊಂಡ ಮಿಶ್ರಣವನ್ನು ಹಾಕಿ, ಉಪ್ಪು,ಸಕ್ಕರೆ  ,ನಿಂಬೆ ರಸ  ಬೆರೆಸಿ  ,೩ ವಿಸಲ್  ಹಾಕಿಸಿದರೆ  ದಾಲ್ ರೈಸ್  ತಿನ್ನಲು ರೆಡಿ..,ಇದು ಆರೋಗ್ಯದಯಕವು ಅಲ್ಲದೆ ,ಮಾಡಲು ತುಂಬಾ ಸುಲಭವಾದ  ರೈಸ್ ಬಾತ್ . 


ನಕ್ಕುಬಿಡಿ ಒಮ್ಮೆ.... :)

"ನಗುವುದು ಸಹಜ ಧರ್ಮ..ನಗಿಸುವುದು ಪರಧರ್ಮ.." ನಗು ಎನ್ನುವುದು ಮನುಷ್ಯ ಜೀವನದ ಅವಿಭಾಜ್ಯ ಅಂಗ..ಮನುಷ್ಯ ಒಂದುವೇಳೆ ನಘು ಎನ್ನುವುದನ್ನು ಮರೆತರೆ ಏನಾಗಬಹುದೆಂದು ಊಹಿಸಲು ಅಸಾಧ್ಯ.

ನಿನ್ನೆ ಭಾನುವಾರ ಬೇಸರ ಕಳೆಯಲೆಂದು ಟಿವಿ ನೋಡುತ್ತಾ ಕುಳಿತಿದ್ದೆ..ಚಾನೆಲ್ ಬದಲಾಯಿಸುವಾಗ ಯಾವದೋ ಒಂದು ಕನ್ನಡ ಚಾನೆಲ್ಲಿನಲ್ಲಿ ಹಾಸ್ಯದ ಕಾರ್ಯಕ್ರಮ ಮೂಡಿ ಬರುತ್ತಾ ಇತ್ತು.. ಹಾಸ್ಯಕವಿ ದುಂಡಿರಾಜರು ಆ ಕಾರ್ಯಕ್ರಮದ ನಿರೂಪಕರು..ಮೊದಲಿನಿಂದಲೂ ನಾನು ಅವರ ಅಭಿಮಾನಿ.ಈ ಹಾಸ್ಯಕವಿಗಳ ಸಮಯ ಪ್ರಜ್ಞೆ ಹೇಗಿರುತ್ತದೆ ಎಂದರೆ  ದಿನ ನಿತ್ಯದ ಜೀವನದ ಆಗು ಹೋಗುಗಳನ್ನು,ನಾವಾಡುವ ಸಾಮಾನ್ಯ ಭಾಷೆಯಲ್ಲೇ ಹಾಸ್ಯವನ್ನು ಹುಡುಕುವವರು ಅವರು..ಆ ಕಾರ್ಯಕ್ರಮದ ಮೂಲ ಉದ್ದೇಶ ಏನೆಂದರೆ ನಮ್ಮ ರಾಜ್ಯದ ಮೂಲೆ ಮೂಲೆ ಅಲ್ಲಿ ಇರುವ ಹಾಸ್ಯ ಕವಿಗಳನ್ನು ಆಹ್ವಾನಿಸಿ ಅವರ ಪ್ರತಿಭೆಗೆ, ಕವಿತೆಗಳಿಗೆ, ಅಣಕುಗಳಿಗೆ ವೇದಿಕೆ ಒದಗಿಸುವುದು. ಜೊತೆಗೆ ದುಂಡಿರಾಜರ ಹಾಸ್ಯ ರಸಾಯನವು ಹರಿಯುತ್ತದೆ.. ಅಲ್ಲಿ ವಾಚಿಸಿದ ನನಗೆ ಇಷ್ಟವಾದ ಕೆಲವೊಂದನ್ನು ಎತ್ತಿಟ್ಟಿದ್ದೇನೆ.. ಓದಿ ನಕ್ಕುಬಿಡಿ ಒಮ್ಮೆ...

* ಹೆಣ್ಣು ಗಂಡನನ್ನು ವರಿಸುವುದು ಸ್ವಯoವರ
  ಆದರೆ, ಗಂಡು ಹೆಣ್ಣನ್ನು ವರಿಸುವುದು ಸ್ವಯಂ"ವರಿ"  ??
* ನಮ್ಮ ಮನೆಯಲ್ಲಿ ಎಲ್ಲದನ್ನೂ ತೀರ್ಮಾನಿಸುವುದು ಅಪ್ಪನೇ
   ಆದರೆ, ಅಮ್ಮನಿಂದ ಪಡೆದು ಅಪ್ಪಣೆ!!!!!!!!
* ರೋಗಿ ಹೆಂಡತಿ  ಗಂಡನಿಗೆ ನಿದ್ರೆ ಉಂಟೆ ಪಾಪ..
   ಸಾಗಿದವು ಚಿಂತೆಗಳು ಒಂದರ ಹಿಂದೆ ಒಂದು..
   ಹೇಗಿದೆಯೋ ಮುಖಬಣ್ಣ ಎರಡನೇ ಹೆಂಡತಿಗೆ..
   ಜಗ ಹೀಗೆ ಅವಅವರಿಗೆ  ನೋಡಯ್ಯ ತಿಮ್ಮ!!!!
*  ಅವಳದ್ದು ಸಿಮ್ಮಾ ರಾಶಿ
    ಅವನದು ಮೇಷ ರಾಶಿ
    ಮಕ್ಕಳಿಗೆ ಬಾರಿ ಕೇಶ ರಾಶಿ!!!
* ಸತ್ಯ ಹೇಳಿದರೆ ಆಗುವುದು ಗದ್ದಲ ಹರತಾಳ
   ಪಕ್ಕದ ಮನೆಯಾಕೆಗೆ ಚೆಲುವೆ ಎಂದರೆ,
   ಹೆಂಡತಿ ಸುಮ್ಮನೆ ಇರ್ತಾಳ....???!!!


* ಡೊಳ್ಳು ಹೊಟ್ಟೆ ಖಾಲಿ ಖಾಲಿ ಜನನಾಯಕ..

  ಯಾವಾಗಲೂ ತಿನ್ನೋದೆನ ನಿನ್ನ ಕಾಯಕ..
   ಓದೋದಕ್ಕೆ ಬರೋಲ್ಲ, ಬರೆಯೋಕು ಬರೋಲ್ಲ..
   ಮಂತ್ರಿ ಹೆಂಗೆ ಅಗ್ತಿಯಪ್ಪ..????
  (ತಿರುಪತಿ ತಿರುಮಲ ಎಂಬ ಹಾಡಿನ remake )
* ಮಾವ  ಮಾವ ಇಲ್ಲಿ ಮರೆಯಾದೆ..
  ಹೋಗ್ತಾ ಇದೆ ಇಲ್ಲಿ ಅಳಿಯನ ಮರ್ಯಾದೆ...
* ನಾನೇಕೆ ಬಡವನು, ನಾನೇಕೆ ಪರದೇಶಿ
   ಸೋಮಾರಿ ಹೇ ಮಾವ ನೀನಿರುವ ತನಕ..

   ಬೂಟು ಕೊಡಿಸುವವ ನೀನೆ,ಪಾಲಿಶ್ ಹಾಕುವವ ನೀನೆ 
   ಉಡಲು,ತೊಡಲು ಅರಿವೇ ಕೊಡಿಸುವವ ನೀನೆ..
   ಮಾಡದೇ ಬಾಣoತಿಯ ಬಾಣoತನ ಮಾಡಿಸುವವನು ನೀನೆ..
   ನಾನೇಕೆ ಬಡವನು ನೀನಿರುವ ತನಕ...
* ನಿನ್ನೆ ಯಾಕೆ, ಇಂದು ಈಕೆ..
   ನಾಳೆ ಮತ್ತೊಬ್ಬಳೆ....
   ಹೀಗೆ ಬದಲು ಮಾಡಲು
   ಹೆಣ್ಣು ಟಿವಿ ಚಾನೆಲ್ಲೇ.....???